ಅದೇ ದಿನ ಸಂಜೆ ಬೆಳಗಾವಿ ತಾಲ್ಲೂಕು ಅರಳಿಕಟ್ಟಿಯ ವಿರಕ್ತಮಠದ ತೋಂಟದಾರ್ಯ ಶಿವಮೂರ್ತಿ ಸ್ವಾಮೀಜಿ ಅವರಿಂದ ಪ್ರವಚನ, ಕಿತ್ತೂರಿನ ಈಶ್ವರ ಗಡಿಬಿಡಿ ಅವರಿಂದ ಭಕ್ತಿಗೀತೆಗಳ ಗಾಯನ ಜರುಗಲಿವೆ ಎಂದಿದ್ದಾರೆ. ಜ.1ರಂದು ದೇವರಶೀಗಿಹಳ್ಳಿಯ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಹಾಗೂ ಪಾಲಾಕ್ಷ ಸ್ವಾಮೀಜಿ ಅವರಿಂದ ಚನ್ನವೀರ ಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ.