ವೈದ್ಯಕೀಯ ಕಾಲೇಜಿನ ರೆಜಿಸ್ಟ್ರಾರ್ ಟಿ.ಶ್ರೀನಿವಾಸ್, ಸಿಬ್ಬಂದಿ ವಿಜಯಕುಮಾರ, ಮೋಹನ್ ರೆಡ್ಡಿ, ದೊಡ್ಡಯ್ಯ ಇದ್ದರು. ರಾಜಮಾತಾ ದೇವಸ್ಥಾನ ಆವರಣವು ಭಕ್ತರಿಂದ ತುಂಬಿತ್ತು. ವಿಶೇಷವಾಗಿ ಅಲಂಕರಿಸಿದ್ದ ಶ್ರೀ ವೆಂಕಟೇಶ್ವರ ಮತ್ತು ಶ್ರೀದೇವಿಯನ್ನು ನೋಡಿ ಭಕ್ತರು ಧನ್ಯತೆ ಅನುಭವಿಸಿದರು. ವೈಕುಂಠ ಏಕಾದಶಿ ದಿನದಂದು ವೈಕುಂಠದ ಬಾಗಿಲು ತೆರೆದಿರುತ್ತದೆ. ಹೀಗಾಗಿ ಈ ದಿನ ಶ್ರೀನಿವಾಸನು ಭಕ್ತರಿಗೆ ನೇರವಾಗಿ ದರ್ಶನ ಕರುಣಿಸುತ್ತಾನೆ ಎನ್ನುವ ನಂಬಿಕೆ ಇದೆ.