ಬೆಂಬಲ: ‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಗಬೇಕು ಎಂಬುದಕ್ಕೆ ಎಲ್ಲರ ಬೆಂಬಲವಿದೆ’ ಎಂದು ಸಚಿವ ಎಚ್.ಆಂಜನೇಯ ಹೇಳಿದರು. ‘ಸಮಾಜಕ್ಕೆ ಲಿಂಗಾಯತರ ಕೊಡುಗೆ ಅಪಾರ. ವೀರಶೈವರು ಹೃದಯವಂತರು. ಇಬ್ಬರನ್ನೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿ, ಮೀಸಲಾತಿ ನೀಡುವ ಮೂಲಕ ಎಲ್ಲ ಸ್ಥಾನಮಾನ ದೊರಕಿಸಬೇಕು ಎಂಬುದು ರಾಜ್ಯ ಸರ್ಕಾರದ ಆಶಯ. ಇದರಲ್ಲಿ ಯಾವುದೇ ರಾಜಕೀಯ ಗಿಮಿಕ್ ಇಲ್ಲ’ ಎಂದು ಸ್ಪಷ್ಟಪಡಿಸಿದರು.