ನಿಯೋಜಿತ ಕೌಜಲಗಿ ತಾಲ್ಲೂಕು ರಚನಾ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಅಶೋಕ ಪರುಶೆಟ್ಟಿ, ಕೌಜಲಗಿ ಹೋಬಳಿಯ ವಿವಿಧ ಗ್ರಾಮಗಳ ಮುಖಂಡರಾದ ರಾಮಯ್ಯ ಮಠದ, ಎಸ್.ಬಿ.ಲೋಕಣ್ಣವರ, ಬಿ.ಜಿ.ಬಳಗಾರ, ಸುಭಾಸ ಕೌಜಲಗಿ, ಅಶೋಕ ಉದ್ದಪ್ಪನವರ, ಜಾಕೀರ ಜಮಾದಾರ ಹಾಗೂ ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೌಜಲಗಿ ತಾಲ್ಲೂಕು ಘೋಷಣೆಯ ಅವಶ್ಯಕತೆ ಮತ್ತು ಕೌಜಲಗಿ ಹೋಬಳಿಯನ್ನು ಗೋಕಾಕ ತಾಲ್ಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.