ಸರತಿ ಸಾಲಲ್ಲಿ ವೈಕುಂಠ ದ್ವಾರ ಪ್ರವೇಶ: ಶುಕ್ರವಾರ ಮುಂಜಾನೆ 5ಕ್ಕೆ ಗ್ರಾಮದ ವಿವಿಧ ದೇವಾಲಗಳಲ್ಲಿ ನಡೆಯುವ ಧನುರ್ಮಾಸ ಪೂಜೆಗೆ ಬಂದ ಭಕ್ತರು, ರಾಮಕೃಷ್ಣ ದೇವಸ್ಥಾನದಲ್ಲಿ ನಡೆದ ಮಹಾ ಮಂಗಳಾರತಿಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದ ಆವರಣದಲ್ಲಿ ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ್ದ ವೈಕುಂಠ ಮಹಾ ದ್ವಾರದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿದ್ದ ಪಂಚ ಲೋಹದಿಂದ ತಯಾರಿಸಿದ ಶ್ರೀಮನ್ನಾರಾಯಣನ ಮೂರ್ತಿಗೆ ನಮಸ್ಕರಿಸಿ, ಮಹಾದ್ವಾರದ ಮೂಲಕ ಸಹಸ್ರಾರು ಭಕ್ತರು ವೈಕುಂಠ ದ್ವಾರವನ್ನು ಪ್ರವೇಶಿಸಿದರು. ದೇವಸ್ಥಾನದಿಂದ ತಿರುಪತಿ ಲಾಡು ವಿತರಿಸಲಾಯಿತು.