ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಸೋದ್ಯಮಕ್ಕೆ ಗಾಳಿಪಟ ಉತ್ಸವ ಪೂರಕ’

Last Updated 30 ಡಿಸೆಂಬರ್ 2017, 9:10 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯ ಪ್ರವಾ ಸೋದ್ಯಮಕ್ಕೆ ಗಾಳಿಪಟ ಉತ್ಸವ ಪೂರಕ ವಾಗಿದೆ’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಜಿಲ್ಲಾಡಳಿತ ಹಾಗೂ ಪ್ರವಾಸೋ ದ್ಯಮ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲಾಡಳಿತದಿಂದ ಆಯೋಜಿಸ ಲಾದ ಎರಡು ದಿನಗಳ ಗಾಳಿಪಟ ಉತ್ಸವ ನಯನ ಮನೋಹರವಾಗಿದ್ದು, ಅದು ಯಶಸ್ವಿಯಾಗಿದೆ. ಜಿಲ್ಲೆಯ ಪ್ರವಾ ಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಪ್ರಯತ್ನ. ರಾಜ್ಯದ ವಿವಿಧ ಐದು ಜಿಲ್ಲೆಯ ವಿದ್ಯಾರ್ಥಿಗಳನ್ನು ಗಾಳಿಪಟ ಉತ್ಸವ ಸಲುವಾಗಿ ಆಹ್ವಾನಿಸಿ, ಅವರಿಗೆ ತರಬೇತಿ ನೀಡುವ ಮೂಲಕ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಉತ್ಸವ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕರಾವಳಿ ಭಾಗದಲ್ಲಿ ಆಗಲಿದೆ’ ಎಂದರು.

‘ಈಗಾಗಲೇ ಕರಾವಳಿ ಉತ್ಸವ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಕಾರವಾರ ಉತ್ಸವ, ಸ್ಕೂಬಾ ಡೈವಿಂಗ್, ಹಾರ್ನ್‌ ಬಿಲ್ ಉತ್ಸವ ಹೀಗೆ ಸರಣಿ ಉತ್ಸವಗಳು ಇಲ್ಲಿ ಜರುಗಲಿದೆ. ಆ ಮೂಲಕ ಜಿಲ್ಲೆ ಸದಾ ಚಟುವಟಿಕೆಯಲ್ಲಿದೆ ಎಂಬುದನ್ನು ರಾಷ್ಟ್ರವ್ಯಾಪಿ ಗಮನ ಸೆಳೆಯಲಾಗುತ್ತಿದೆ. ಇದರಿಂದ ದೇಶ– ವಿದೇಶಗಳ ವಿವಿಧ ಮೂಲೆಗಳಿಂದ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಬರಲಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ‘ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳ ಲಾಗಿದೆ. ಗುರುವಾರ ಗೋಕ ರ್ಣದಲ್ಲಿಯೂ  ಹಮ್ಮಿಕೊಳ್ಳ ಲಾಗಿದ್ದ ಈ ಉತ್ಸವ ಸಂಪೂರ್ಣ ಯಶಸ್ವಿ ಯಾಗಿದೆ. ಇದರಿಂದಾಗಿ ನಿರಂತರವಾಗಿ ಗಾಳಿಪಟ ಉತ್ಸವವನ್ನು ಆಯೋಜಿಸಲು ಉತ್ತೇಜನ ಸಿಕ್ಕಂತಾಗಿದೆ’ ಎಂದರು.

ಗಮನ ಸೆಳೆದ ಗಾಳಿಪಟಗಳು: ಪಾಕಿ ಸ್ತಾನದ ವಶದಲ್ಲಿರುವ ಭಾರತೀಯ ಸೇನೆಯ ಕುಲಭೂಷಣ್‌ ಜಾಧವ್‌ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ಮನವಿ ಹೊಂದಿರುವ ಗಾಳಿಪಟ, ರಿಂಗ್‌ಕೈಟ್, ಸ್ಟಂಟ್, ರಾಕೆಟ್, ಪೈಲಟ್, ಬಗ್ಗಿ, ಸ್ನೇಕ್ ಡ್ರಾಗನ್, ಟೈಗರ್‌, ಈಗಲ್, ಯಕ್ಷಗಾ ನದ ಚಿತ್ರಣ ಹೊಂದಿರುವ ವಿವಿಧ ವಿನ್ಯಾಸದ ಗಾಳಿಪಟಗಳು ಜನರ ಗಮನ ಸೆಳೆದವು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಯೋಗೇಶ್ವರ್, ಬೆಂಗಳೂರು ಕೈಟ್ ಕ್ಲಬ್‌ನ ಗಾಳಿಪಟ ತರಬೇತುದಾರ ವಿ.ಕೆ.ರಾವ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ್ ಹಾಜರಿದ್ದರು.

* * 

ಐದು ಜಿಲ್ಲೆಗಳಿಂದ ವಿದ್ಯಾ ರ್ಥಿಗಳನ್ನು ಆಯ್ಕೆ ಮಾಡಿ ಗಾಳಿಪಟ ನಿರ್ಮಾಣ ಮತ್ತು ಅದನ್ನು ಹಾರಿಸುವ ಕುರಿತು ತರಬೇತಿ ನೀಡಲಾಗಿದೆ
ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT