ಗ್ರಾಮದ ಸ್ವಾತಿ ಮಹೇಶ ಮಾದರ ಎಂಬುವರನ್ನು ಹೆರಿಗೆಗಾಗಿ ಬೆಳಿಗ್ಗೆ 8ಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರಲಿಲ್ಲ. ಬಳಿಕ ಗರ್ಭಿಣಿ ಜತೆ ಬಂದಿದ್ದ ಸುಮತಾಬಾಯಿ ಯಲಿಗಾರ ಮತ್ತು ಬೋರಮ್ಮ ಮಾದರ ಎಂಬುವರೇ ಸ್ವಾತಿ ಅವರಿಗೆ ಹೆರಿಗೆ ಮಾಡಿಸಿದರು. ಆದರೆ, ಶಿಶು ಬದುಕುಳಿಯಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.