‘ರೈತರು ವಿರೋಧಪಕ್ಷದ ವಿರುದ್ಧ ಪ್ರತಿಭಟನೆ ಮಾಡಿದರೆ ವಿನಾ ಆಡಳಿತ ಪಕ್ಷದ ವಿರುದ್ಧ ಮಾಡಲಿಲ್ಲ. ಅಲ್ಲದೆ, 400 ರೈತರು ತತ್ಕಾಲ್ ರೈಲು ಟಿಕೆಟ್ ಅನ್ನು ಹೇಗೆ ಪಡೆದರು ? ಪೊಟ್ಟಣದಲ್ಲಿ ಆಹಾರ, ಬಿಸ್ಲೆರಿ ನೀರು ಅವರಿಗೆ ಹೇಗೆ ಸಿಕ್ಕಿತು. ನೀವೇನಾದರೂ ಸಹಕಾರ ನೀಡಿದ್ದೀರಾ ದಿನೇಶ್ ಗುಂಡೂರಾವ್’ ಎಂದು ಉಪೇಂದ್ರ ಟ್ವೀಟ್ ಮಾಡಿರುವುದಕ್ಕೆ ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.