ಯಡ್ರಾಮಿ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಶೋಕ ಸಾಹು ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಸುರೇಶ ಡಂಬಳ, ಈರಣ್ಣ ಸುಂಕದ, ಜಮೀರ್ ಪಟೇಲ್ ಚಿಂಚೋಳಿ, ಗೊಲ್ಲಾಳಪ್ಪ ಡೋಣಿ, ಇಮಾಮ್ ಖಾಸೀಮ, ಪ್ರಭುದೇವ್ ಜವಳಗಿ, ಹಯ್ಯಾಳಪ್ಪ ಗಂಗಾಕರ್, ದಸ್ತಗೀರ್ ಕಾಚಾಪುರ, ಷಂಶುದ್ದೀನ್ ಸಾಬ್, ದಸ್ತಗೀರ್ ಸಾಬ್ ಚೌಧರಿ, ಕಾಶಿನಾಥಗೌಡ ಮಾಗಣಗೇರಿ, ಅಶೋಕ ಸುಬೇದಾರ್, ಮಲ್ಲಿಕಾರ್ಜುನ ಹುಗ್ಗಿ, ವಾಜೀದ್ ಖಾನ್ ನಾಡಗೌಡ, ಮಾಳಿಂಗರಾಯ ಕರಗೊಂಡ ಸೇರಿದಂತೆ ಅಶೋಕ ಸಾಹು ಗೋಗಿ ಅಭಿಮಾನಿಗಳ ಸಂಘ ಯಡ್ರಾಮಿ ವಲಯ ಘಟಕದ ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.