ಸಚಿವ ಎಚ್.ಆಂಜನೇಯ ಅವರಿಗೆ ಬುಡಕಟ್ಟು ಸಂಪ್ರದಾಯದಂತೆ ಬಿದಿರಿನಿಂದ ತಯಾರಿಸಿರುವ ಟೋಪಿ ಧರಿಸಿ, ಮೇಕೆಯ ಚರ್ಮದಿಂದ ತಯಾರಿಸಿರುವ ಉಡುಪು ತೊಡಿಸಿ ಗೌರವಿಸಲಾಗುವುದು. ಜೇನು, ಬೇಲ್ಲದ ಹಣ್ಣು, ಅರಣ್ಯದ ಸೊಪ್ಪಿನಿಂದ ತಯಾರಿಸಿರುವ ವನವಾಸಿಗಳ ಆಹಾರವನ್ನು ಬಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಂಘದ ಅಧ್ಯಕ್ಷರು ತಿಳಿಸಿದರು.