ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಗ್ರಾ. ಪಂ. ಸದಸ್ಯೆಯರ ಅಪಹರಣ

Last Updated 31 ಡಿಸೆಂಬರ್ 2017, 11:33 IST
ಅಕ್ಷರ ಗಾತ್ರ

ಗಂಗಾವತಿ: ಬಹುಮತ ಸಾಬೀತುಪಡಿಸುಲು ಶೀಘ್ರ ದಿನಾಂಕ ನಿಗದಿ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ ನಾಲ್ವರು ಮಹಿಳಾ ಸದಸ್ಯರು ಸೇರಿದಂತೆ ಒಟ್ಟು ಐವರನ್ನು ತಾಲ್ಲೂಕಿನ ಆನೆಗೊಂದಿ ದುರ್ಗಾದೇವಿ ಬೆಟ್ಟದಲ್ಲಿ ಭಾನುವಾರ ಮುಂಜಾನೆ ಅಪರಿಚಿತರು ಅಪಹರಿಸಿದ್ದಾರೆ.

ಶಿವಮ್ಮ ಗುರಣ್ಣ ಹಾವಳಗಿ, ಶರಣಮ್ಮ ಶರಣೇಗೌಡ ಬಿರಾದಾರ, ಶ್ರೀದೇವಿ ಮಹಾದೇವಪ್ಪ ಪೂಜಾರಿ, ಶಶಿಕಲಾ ಶಿವಣ್ಣ ದೊಡ್ಡಮನಿ ಹಾಗೂ ಶಿವಣ್ಣ ದೊಡ್ಮನಿ ಅಪಹರಣಗೊಂಡಿರುವ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು.

ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷೆ ಶಿವಮ್ಮ ಗುರಣ್ಣ ಹಾವಳಗಿ ಅವರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ತೋರಿಸಿದ್ದರಿಂದ ಬಹುಮತ ಸಾಬೀತು ಪಡಿಸಲು ಶೀಘ್ರ ದಿನಾಂಕ ನಿಗದಿಯಾಗುವ ಹಿನ್ನೆಲೆಯಲ್ಲಿ ಶಿವಮ್ಮ ಅವರು ಸಹ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.

ಶನಿವಾರ ಗ್ರಾಮದಿಂದ ಹೊರಟ ಸದಸ್ಯರು ನೇರವಾಗಿ ರಾತ್ರಿ ಆನೆಗೊಂದಿಯ ಬಳಿ ದುರ್ಗಾಬೆಟ್ಟಕ್ಕೆ ಬಂದಿದ್ದಾರೆ. ಮಹಿಳಾ, ಪುರುಷ ಸದಸ್ಯರು ಏಳು ಹಾಗೂ ಕುಟುಂಬ ಸದಸ್ಯರು ಸೇರಿ ಒಟ್ಟು 25 ಜನರ ತಂಡ ಬಂದಿತ್ತು.

ಮಹಿಳಾ ಸದಸ್ಯೆಯರು ಚಳಿ, ಭದ್ರತೆ ಹಾಗೂ ಸುರಕ್ಷತೆ ಹಿನ್ನೆಲೆ ವಾಹನದಲ್ಲಿ ಮಲಗಿದ್ದರು. ಉಳಿದವರು ದೇವಸ್ಥಾನಕ್ಕೆ ತೆರಳಿ ದೇಗುಲದ ಆವರಣದಲ್ಲಿ ಮಲಗಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಅಪರಿಚಿತರು ಬಂದು ಚಾಲಕನಿಗೆ ಪಿಸ್ತೂಲು ತೋರಿಸಿ ಮಹಿಳಾ ಸದಸ್ಯೆಯರನ್ನು ಅಪಹರಿಸಿದ್ದಾರೆ.

ಚಾಲಕ ರಾಜೂಗೌಡ ಪಾಟೀಲ್ ಅವರಿಗೆ ಪಿಸ್ತೂಲು ತೋರಿಸಿ ವಾಹನ ಸಮೇತ ಗಂಗಾವತಿಯಿಂದ ಹೊರವಲಯಕ್ಕೆ ಕರೆದೊಯ್ದ ಅಪರಿಚಿರು, ತಾಲ್ಲೂಕಿನ ಹೇರೂರು ಬಳಿ ಆತನನ್ನು ಇಳಿಸಿ ಅಧ್ಯಕ್ಷೆ ಅಕಾಂಕ್ಷಿ ಶಿವಮ್ಮ ಗುರಣ್ಣ ಹಾವಳಗಿ ಸಹಿತ ಒಟ್ಟು ನಾಲ್ಕು ಜನ ಸದಸ್ಯೆಯರನ್ನು ಅಪಹರಿಸಲಾಗಿದೆ.

ಬೊಬ್ಬನಳ್ಳಿಯ ಚಂದ್ರಕಾಂತ ಶರಣ್ಣ ಸಗರ, ನಿಂಗಣ್ಣ ವಿಠೋಬ ಚನ್ನಣ್ಣ, ಗುಂದಗಿಯ ಮಲ್ಲನಗೌಡ ಪಾಟೀಲ್ ಕಟ್ಟಿ, ಮರಿಯಪ್ಪ ಸಿಂಗೆ ಗುಂದಗಿ, ಸಿದ್ದನಗೌಡ ಬಸವನಗೌಡ ಪಾಟೀಲ್ ಎಂಬುವವರು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಉಳಿದ ಸದಸ್ಯರು ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT