‘ಮಹದಾಯಿಯ ಒಂದು ಹನಿ ನೀರನ್ನೂ ತಿರುಗಿಸಲು ಬಿಡುವುದಿಲ್ಲ’ ಎಂಬ, ಸೋನಿಯಾ ಗಾಂಧಿ ಅವರ ಮಾತುಗಳನ್ನು, ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಅನುಕೂಲಕರವಾಗಿ ಮರೆತಂತೆ ತೋರುತ್ತದೆ. ಮಹದಾಯಿ ವಿವಾದ ಬೃಹತ್ತಾಗಿ ಬೆಳೆಯಲು ಕಾಂಗ್ರೆಸ್ನ ಕೊಡುಗೆ ಸಣ್ಣದೇನಲ್ಲ. ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು ಸಂಬಂಧಪಟ್ಟ ರಾಜ್ಯಗಳ ಸಭೆ ಕರೆದು, ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸಬಹುದಿತ್ತಲ್ಲವೇ? ನ್ಯಾಯ ಮಂಡಳಿ ರಚಿಸಿದ್ದು ಅವರೇ ಅಲ್ಲವೇ?