ಯುವಕರು, ವೃದ್ಧರು, ಮಹಿಳೆಯರು, ಮಕ್ಕಳು ಹಗಲು– ರಾತ್ರಿ– ಚಳಿಯೆನ್ನದೆ ನೂರಾರು ಕಿಲೋಮೀಟರ್ ದೂರದಿಂದ ಬಂದು, ತಮ್ಮ ನಾಡಿನ ನಾಳೆಯ ಹಿತಕ್ಕಾಗಿ ರಾಜಕೀಯ ಪಕ್ಷಗಳ ಮುಖಂಡರ ಮನೆಮುಂದೆ ರೋದಿಸಿದರು. ಸೌಜನ್ಯ ಮತ್ತುಮಾನವೀಯತೆಯಿಂದಲಾದರೂ ಅವರ ಬಳಿ ಸುಳಿದು ಅವರ ಸಮಸ್ಯೆ ಬಗೆಹರಿಸುವವ್ಯವಧಾನ, ಪ್ರಾಮಾಣಿಕ ಪ್ರಯತ್ನ ಯಾವುದೇ ರಾಜಕೀಯ ಪಕ್ಷದಲ್ಲಿ ಕಾಣದೇ ಇರುವುದು ಇಂದಿನ ದುರಂತ.