‘ಇಷ್ಟಲಿಂಗ ಜಾತಿಯ ಗುರುತಲ್ಲ. ಅದು ಮಾನವೀಯ ಮೌಲ್ಯ ಬೆಸೆಯುವ ಗುರುತು. ಶತಮಾನಗಳ ಹಿಂದೆ ಇದ್ದ ವೇದ, ಉಪನಿಷತ್ತು, ಆಗಮಗಳನ್ನು 12ನೇ ಶತಮಾನದ ಶರಣರು ಅನುಭವ ಮಂಟಪದಲ್ಲಿ ಚರ್ಚೆ ನಡೆಸಿ, ಶೈವ ಸಿದ್ದಾಂತ ಹಾಗೂ ವೇದ, ಉಪನಿಷತ್ತು, ಆಗಮಗಳನ್ನು ಒಪ್ಪದೆ ಸಮಾಜಕ್ಕೆ ಅನುಕೂಲಕರವಾಗುವ ವೈಚಾರಿಕ ಸಿದ್ದಾಂತಕ್ಕೆ ಬದ್ಧರಾದರು. ಬಸವಾದಿ ಶರಣರ ಪ್ರಯತ್ನದಿಂದ ಸಮಾಜ ಹಾಗೂ ವ್ಯಕ್ತಿ ಸ್ವಾತಂತ್ರ್ಯ, ವರ್ಣ ವರ್ಗ, ಲಿಂಗಭೇದದಂತಹ ವಿಷಯಗಳು ಆತ್ಮವಿಮರ್ಶೆಯ ಜೊತೆಗೆ ವಿಸ್ತಾರಗೊಂಡು ಸಾಮಾಜಿಕ ವಿಮರ್ಶೆಯಾಗಿಯೂ ಪರಿವರ್ತನೆಗೊಂಡವು' ಎಂದರು.