ನಗರಸಭೆ ಸದಸ್ಯ ರೌಫ್ ಮಾತನಾಡಿ, ‘ಅಹಿಂದ ವೇದಿಕೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸಮಾಜದ ಏಳಿಗೆಗೆ ಅವಿರತ ಶ್ರಮಿಸಬೇಕು’ ಎಂದರು. ಕೆ. ಗೌಸ್ ಮಾತನಾಡಿ, ‘ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿ ವೇದಿಕೆಯನ್ನು ಬಲಿಕೊಡಬಾರದು’ ಎಂದು ತಿಳಿಸಿದರು. ವೇದಿಕೆ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಲಿ, ಪ್ರಮುಖರಾದ ಚೇತನರಾಜ್, ಶಫಿ ಬರಕಾತಿ, ರಘುನಂದನ, ಟಿ. ಜಂಬಯ್ಯ, ಬದ್ರಿನಾಥ, ಬಾಷಾ, ಕೆ.ರವಿ, ಪಿ. ಬಸವರಾಜ, ಎಚ್. ಪಂಪಾ, ಸಿ. ಕೊಟ್ರೇಶ್, ಡಿ. ರಾಮಚಂದ್ರ ಇದ್ದರು.