‘ಸ್ವಸ್ಥ ಸಮಾಜ, ರಾಷ್ಟ್ರ ನಿರ್ಮಾಣಕ್ಕಾಗಿ ವಿಶ್ವ ಮಾನವ ಚಿಂತನೆಗಳನ್ನು ಪಸರಿಸಿದ ಕುವೆಂಪು ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ದೇಶಪ್ರೇಮಿಗಳಾಗಿ ಅನೇಕ ಬರಹಗಳ ಮೂಲಕ ಕನ್ನಡ ನಾಡಿನಲ್ಲಿ ಚಿರಸ್ಮರಣೀಯರಾಗಿ ಉಳಿದಿದ್ದಾರೆ. ವಿಶ್ವಜ್ಯೋತಿ ಬಸವಣ್ಣ, ಜ್ಯೋತಿಬಾ ಫುಲೆಯಂತೆ ಸಮಾನತೆಗಾಗಿ ಹೆಚ್ಚಿನ ಮಹತ್ವವನ್ನು ಅವರ ಸಾಹಿತ್ಯದ ಮೂಲಕ ಈ ಸಮಾಜಕ್ಕೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.