ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿದ್ದ ಡಾ. ವೀರಬಸಂತರಡ್ಡಿ, ಬಿಜೆಪಿ ಅಭ್ಯರ್ಥಿ ಚಂದ್ರಶೇಖರಗೌಡ ಮಾಗನೂರ, ಕಾಂಗ್ರೆಸ್ನ ಡಾ.ಎ.ಬಿ.ಮಾಲಕರಡ್ಡಿ ವಿರುದ್ಧ ಸೋತಿದ್ದರು. ಬಿಜೆಪಿಯ ಈ ಹಳೇ ಮುಖಗಳ ಜತೆಗೆ ಈಗ ಡಾ. ಶರಣಭೂಪಾಲರಡ್ಡಿ ನಾಯ್ಕಲ್, ಡಾ. ಭೀಮಣ್ಣ ಮೇಟಿ ಎಂಬ ಹೊಸ ಮುಖಗಳು ಯಾದಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿವೆ. ‘ವ್ಯಕ್ತಿತ್ವ, ಆರ್ಥಿಕ ಸ್ಥಿತಿ, ಜಾತಿಬಲ, ಸಾಮಾಜಿಕ ಕಾರ್ಯ, ಕ್ಷೇತ್ರದಲ್ಲಿನ ವರ್ಚಸ್ಸು ಕುರಿತು ಯಡಿಯೂರಪ್ಪ ಅವರಿಗೆ ನಾಲ್ವರೂ ವರದಿ ಒಪ್ಪಿಸಿದ್ದಾರೆ’ ಎಂಬುದಾಗಿ ಪಕ್ಷದ ಮೂಲಗಳು ಹೇಳುತ್ತವೆ. ‘ಕೆಲವರು ಟಿಕೆಟ್ಗಾಗಿ ತೆರೆಮರೆ ಕಸರತ್ತು ನಡೆಸಿದ್ದಾರೆ’ ಎಂದು ಬಿಜೆಪಿ ಎರಡನೇ ಸಾಲಿನ ನಾಯಕರು ಹೇಳುತ್ತಿದ್ದಾರೆ.