‘ನಾನು ಯಾರು ಗೊತ್ತಾ? ವಾಹನ ಬಿಡದಿದ್ದರೆ ತೊಂದರೆ ಅನುಭವಿಸ್ತೀರಾ’ ಎಂದು ಬೆದರಿಕೆ ಹಾಕಿದ್ದರು. ಕಬ್ಬನ್ ಉದ್ಯಾನದ ಬಳಿ ಸಿಕ್ಕಿಬಿದ್ದ ಸವಾರರೊಬ್ಬರು ‘ನಾನು ನಟ ಅಂಬರೀಷ್ ಸಹೋದರ. ನನ್ನ ತಂಟೆಗೆ ಬಂದರೆ ಕೆಲಸ ಕಳೆದುಕೊಳ್ಳುತ್ತೀಯಾ’ ಎಂದು ಧಮ್ಕಿ ಹಾಕಿ ನಿಂದಿಸಿದ್ದರು. ಕೆಲ ಕಾಲ ವಾಗ್ವಾದ ನಡೆಸಿದ ಸವಾರ ಅಲ್ಲಿಂದ ಓಡಿಹೋಗಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದರು.