‘ಸಿದ್ಧಾರ್ಥ ನಗರ ರಸ್ತೆ ಬದಿಯಲ್ಲಿ ಅವರ ಜಮೀನಿದೆ. ರಸ್ತೆಗೆ ಸೇರಿದ 28 ಗುಂಟೆಯನ್ನು ಅವರು ಒತ್ತುವರಿ ಮಾಡಿದ್ದಾರೆ. ಸಿದ್ದಾರ್ಥ ನಗರದಿಂದ ಚನ್ನಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರು ಹಾಕಲಾಗುತ್ತಿದೆ. ಹೀಗಾಗಿ, ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದಕ್ಕೆ ಒಪ್ಪದ ಸಂದೀಪ್, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಹೇಳಿದರು.