ಮುಗ್ಧ ಮತದಾರರಲ್ಲಿ ಸೌಹಾರ್ದತೆ, ಸಮಾನತೆ, ಶ್ರಮ ಜೀವನದ ಕುರುಹುಗಳ ಬಗ್ಗೆ ತಿಳಿಸಿಕೊಡುವುದು ಬಹುಮುಖ್ಯವಾಗಿದೆ ಎಂದರು. ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಮರಿಸೋಮನಹಳ್ಳಿ ನಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿ ಇರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರನ್ನು ಒಂದುಗೂಡಿಸಲಾಗುವುದು ಎಂದರು.