ಭಾಗಮಂಡಲದ ತ್ರಿವೇಣಿ ಸಂಗಮದ ಬಳಿಯಲ್ಲಿ ಪ್ರವಾಸಿಗರು ಅಡುಗೆ ಮಾಡಿ ಊಟದ ಎಂಜಲನ್ನು ಕಾವೇರಿ ನದಿಗೆ ಹಾಕದಂತೆ ನಿರ್ಬಂಧ ಹೇರಬೇಕು.ಸಂಗಮದ ಹೊರಭಾಗದಲ್ಲಿ ಸಿ.ಸಿ.ಕ್ಯಾಮೆರಾವನ್ನು ಅಳವಡಿಸುವುದರ ಮೂಲಕ ಕ್ಷೇತ್ರಕ್ಕೆ ಆಗಮಿಸುವವರ ಚಲನವಲನಗಳನ್ನು ಗಮನಿಸುವ ಕಾರ್ಯವಾಗಬೇಕು. ಕ್ಷೇತ್ರಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ದೇವರ ಪೂಜಾ ವಿಧಿವಿಧಾನಗಳನ್ನು ಸುಗಮವಾಗಿ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಬಾದುಮಂಡ ಮುತ್ತಪ್ಪ, ಪಾಡಿಯಮ್ಮಂಡ ಯೋಗಿಶ್ ಮೊಣ್ಣಮ್ಮಯ್ಯ, ಮಣವಟ್ಟಿರ ಪಾಪು ಚಂಗಪ್ಪ, ಮಣವಟ್ಟಿರ ಹರೀಶ್ ಬಿದ್ದಪ್ಪ ಇದ್ದರು.