ಮಂಗಳವಾರದ (ಜ.2) ಬನದ ಹುಣ್ಣಿಮೆ ಆಚರಣೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಸಾಕಷ್ಟು ಮಂದಿ ಕಾಲ್ನಡಿಗೆ, ಚಕ್ಕಡಿಗಳಲ್ಲಿ ಬರುತ್ತಾರೆ. ಅವರು ಪುಣ್ಯಸ್ನಾನಕ್ಕೆ ಮಲಪ್ರಭಾ ನದಿಗೆ ಹೋದರೆ ಅವರಿಗೆ ನಿರಾಶೆಯಾಗಲಿದೆ. ಜೋಗುಳಬಾವಿ ಹಾಗೂ ಯಲ್ಲಮ್ಮನಗುಡ್ಡದಿಂದ 5 ಕಿ.ಮೀ. ಕಾಲ್ನಡಿಗೆಯಿಂದ ಬಂದ್ರೆ, ಅಲ್ಲಿ ಮಲಪ್ರಭೆಯ ನೀರು 1 ಕಿ.ಮೀ. ದೂರ ಹರಿಯುತ್ತಿರುವುದರಿಂದ ಅಲ್ಲಿಯವರೆಗೆ ಹೋಗುವುದು ಅನಿವಾರ್ಯವಾಗಿದೆ. ಇನ್ನು ಜೋಗುಳಬಾವಿ ಸತ್ಯಮ್ಮನ ಪಕ್ಕದ ತವರಿಕರೆ ಕೂಡಾ ಸಂಪೂರ್ಣ ಖಾಲಿಯಾಗಿದೆ. ಅಲ್ಲಿ ಗಿಡಗಂಟಿಗಳು ಬೆಳೆದು, ಕೆಸರಿನ ಗದ್ದೆಯಂತೆಯಾಗಿದೆ.