‘ನನ್ನಂತೆ ನೀವು ಬ್ರಹ್ಮಚಾರಿಗಳಾಗಬೇಡಿ. ಎಲ್ಲರೂ ಮದುವೆಯಾಗಿ ಚಿಕ್ಕ ಕುಟುಂಬ ಕಟ್ಟಿಕೊಳ್ಳಿ. ಸಮಾಜ ಮತ್ತು ದೇಶವನ್ನು ದೊಡ್ಡ ಪರಿವಾರದಂತೆ ಪರಿಗಣಿಸಿ ಬದುಕಿ. ಇತರರಿಗೆ ಒಳಿತು ಮಾಡುವಲ್ಲಿ ಖುಷಿ ಕಾಣಿರಿ. ನಾಲ್ಕು ಗೋಡೆ ನಡುವೆ ಪೂಜೆ ಮಾಡುವುದಕ್ಕಿಂತ, ಜನರನ್ನೇ ದೇವರು ಎಂದು ನಂಬಿ ಸೇವೆ ಮಾಡುವುದೇ ಶ್ರೇಷ್ಠ’ ಎಂದು ಅಣ್ಣಾ ಹಜಾರೆ ಹೇಳಿದರು.