ಕೆಲಸ ಮಾಡದವರನ್ನು ಸೇವೆಯಿಂದ ವಜಾಗೊಳಿಸುವುದು ಬಿಟ್ಟು ಗ್ರಾಮಗಳಿಗೆ ಅಟ್ಟಿದರೆ ವ್ಯವಸ್ಥೆ ಸರಿಯಾಗುತ್ತದೆಯೇ? ಸರ್ಕಾರವೇ ಪರೋಕ್ಷವಾಗಿ ‘ನೀವು ಹೋಗಿ ಹಳ್ಳಿಗಳಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ, ನಡೆಯುತ್ತದೆ’ ಎಂದಂತಾಯಿತಲ್ಲವೇ? ನಿದ್ದೆ ಬರುವವನಿಗೆ ಹಾಸಿ ಕೊಟ್ಟಂತೆ. ಕೆಲಸ ಮಾಡದವರು ಕಣ್ಗಾವಲು ವ್ಯವಸ್ಥೆಯಿಂದ ದೂರವಿದ್ದು, ಇನ್ನೂ ಚೆನ್ನಾಗಿ ಗೊರಕೆ ಹೊಡೆಯುವರೆಂಬ ಪರಿಜ್ಞಾನ ಬೇಡವೇ?