‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಪ್ರಧಾನಿ ಕಚೇರಿ ಎದುರು ಹೋರಾಟ ನಡೆಸಬೇಕು. ನವಲಗುಂದ, ನರಗುಂದದಲ್ಲಿ ಚಳವಳಿ ಮಾಡಿದರೆ ಏನೂ ಪ್ರಯೋಜನವಾಗದು. ಎಲ್ಲರೂ ದೆಹಲಿಯಲ್ಲಿ ಕಚೇರಿಗಳಿಗೆ ಘೇರಾವ್ ಹಾಕಬೇಕು, ನಾನೂ ಬರುತ್ತೇನೆ. ಪ್ರಧಾನಮಂತ್ರಿ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಅವರಿಗೆ ಅಧಿಕಾರ ಇದೆ. ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕೂರಿಸಿ ಮಾತನಾಡಿ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರದಲ್ಲಿರುವ ನಮ್ಮ ರಾಜ್ಯದ ಮಂತ್ರಿಗಳು, ಸಂಸದರು ಮಹದಾಯಿ ವಿಚಾರವಾಗಿ ಧ್ವನಿ ಎತ್ತಬೇಕು. ಇದು ಬರೀ ಜನರ ಸಮಸ್ಯೆಯಾಗಿಲ್ಲ. ನಮ್ಮ ರಾಜ್ಯದ ಸಮಸ್ಯೆಯಾಗಿದೆ’ ಎಂದು ಹೇಳಿದರು.