ಬಂದ್ ವಾಪಸ್: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ಭಾರಿಪಾ ಬಹುಜನ ಮಹಾಸಂಘದ ಮುಖಂಡ ಪ್ರಕಾಶ್ ಅಂಬೇಡ್ಕರ್ ಅವರು ಬಂದ್ ಕೈಬಿಟ್ಟಿರುವುದಾಗಿ ಸಂಜೆ 4.30ಕ್ಕೆ ಘೋಷಿಸಿದರು.ಅಷ್ಟು ಹೊತ್ತಿಗಾಗಲೇ ಬಂದ್ ಬಹುತೇಕ ಯಶಸ್ವಿಯಾಗಿತ್ತು. ರಾಜ್ಯದ ಶೇ 50ರಷ್ಟು ಜನರು ಬಂದ್ನಲ್ಲಿ ಭಾಗವಹಿಸಿದ್ದು, ಯಶಸ್ವಿಯಾಗಿದೆ ಎಂದು ತಿಳಿಸಿದರು. ಪ್ರಕಾಶ್ ಅಂಬೇಡ್ಕರ್ ಈ ಬಂದ್ಗೆ ಕರೆ ನೀಡಿದ್ದರು.