2008ರ ಜನವರಿ 27ರಂದು ಮಲ್ಲಣ್ಣನ ಮಗ ಬಿಕ್ಷಾವತ್ ದಲಿತ ಮಹಿಳೆಯ ಮನೆಗೆ ನುಗ್ಗಿ ಅವರ ಕೈ ಹಿಡಿದೆಳೆದಿದ್ದ. ಮಹಿಳೆ ಕಿರುಚಾಡಿದಾಗ ಮನೆಯ ಇತರರು ಬಂದು ಬಿಕ್ಷಾವತ್ನನ್ನು ಹಿಡಿದು ಕಟ್ಟಿ ಹಾಕಿದ್ದರು. ಆದರೆ, ಮಲ್ಲಣ್ಣ ಮತ್ತು ಇತರರು ಬಂದು ಬಿಕ್ಷಾವತ್ನನ್ನು ಬಿಡಿಸಿಕೊಂಡಿದ್ದರು. ಮಹಿಳೆಯನ್ನು ಜಾತಿ ಹೆಸರಿನಲ್ಲಿ ನಿಂದಿಸಿದ್ದರು ಎಂದು ದೂರು ದಾಖಲಾಗಿತ್ತು.