ಬೆಳಗೊಳದ ಬೆಟ್ಟದ ನೆತ್ತಿಯಲ್ಲಿರುವ ಬರೋಬ್ಬರಿ 57ಅಡಿ ಎತ್ತರದ ಗೊಮ್ಮಟೇಶನ ದರ್ಶನ ಪಡೆಯುವುದು ಪ್ರತಿಯೊಬ್ಬರ ಆಶಯ. ಆದರೆ, ಮಕ್ಕಳು, ವೃದ್ಧರು ಈ ಗಿರಿಯ ನೆತ್ತಿಯನ್ನೇರುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವರ್ತಕ ಮಹಾವೀರ್ ಜೈನ್ ಎಂಬುವರು ಶ್ರವಣಬೆಳಗೊಳದ ಭಂಡಾರ ಬಸದಿ ಎಂಬಲ್ಲಿ ಈ ಮೂರ್ತಿಯನ್ನು ಸ್ಥಾಪಿಸಲು ಮುಂದೆ ಬಂದಿದ್ದಾರೆ. ವಿಂಧ್ಯಗಿರಿಯ ಮೇಲಿನ ಬಾಹುಬಲಿಗೆ 12ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆದರೆ, ಈ ಮೂರ್ತಿಗೆ ನಿತ್ಯ ಪೂಜೆ, ಅಭಿಷೇಕ ನಡೆಸಲು ಉದ್ದೇಶಿಸಲಾಗಿದೆ.