ಬೇಸಾಯಕ್ಕೆ ಹಳ್ಳಿಕಾರ್ ಜೋಡೆತ್ತುಗಳೇ ಸೂಕ್ತ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಹಾವೇರಿ ಜಿಲ್ಲೆಯ ಬಂಡಿಗೌಡ ತಿಳಿಸಿದರು. ಮಂಡ್ಯ, ಕೊಡಗು, ಚಾಮರಾಜ ನಗರ, ಚಿಕ್ಕಮಗಳೂರು, ಹಾವೇರಿ, ಬಳ್ಳಾರಿ, ಗದಗ ಜಿಲ್ಲೆಯಿಂದ ನೂರಾರು ರೈತರು ಜೋಡೆತ್ತು ಖರೀದಿಗೆ ಬಂದಿದ್ದಾರೆ. ಜಾನುವಾರು, ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಮಹೇಶಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.