ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿ ಕೆ.ಜಿ.ಗೆ ₹ 20 ಇಳಿಕೆ

Last Updated 9 ಜನವರಿ 2018, 9:00 IST
ಅಕ್ಷರ ಗಾತ್ರ

ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಕೆ.ಜಿ. ₹ 100ಕ್ಕೆ ಮಾರಾಟವಾಗುತ್ತಿದ್ದ ದ್ರಾಕ್ಷಿಹಣ್ಣು ಈ ವಾರ ₹ 80ಕ್ಕೆ ಮಾರಾಟವಾಗುತ್ತಿದೆ. ಹೊಸದುರ್ಗದಿಂದ ಹಾಸನ ಮಾರುಕಟ್ಟೆಗೆ ದ್ರಾಕ್ಷಿ ಹಣ್ಣು ಬರುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಬೆಲೆ ಇಳಿಕೆಯಾಗಿದೆ. ಇದರಿಂದಾಗಿ ಹಣ್ಣು ಪ್ರಿಯರಿಗೆ ಸಂತಸವಾಗಿದೆ.

ಇನ್ನು ದಾಳಿಂಬೆ ಕೂಡ ಕೆ.ಜಿ ಗೆ ₹ 20 ಇಳಿಕೆಯಾಗಿದೆ. ಕಳೆದ ವಾರ ₹ 100ಕ್ಕೆ ಮಾರಾಟವಾಗುತ್ತಿದ್ದ ದಾಳಿಂಬೆ, ಈ ವಾರ ₹ 80ಕ್ಕೆ ಬಂದಿದೆ. ‘ಮಹಾರಾಷ್ಟ್ರದಿಂದ ಹಾಸನ ಮಾರುಕಟ್ಟೆಗೆ ದಾಳಿಂಬೆ ಆಮದು ಮಾಡಿಕೊಳ್ಳಲಾಗುತ್ತದೆ. ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಬರುತ್ತಿರುವ ಕಾರಣ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಸಫಿ.

ಟೊಮೆಟೊ ಬೆಲೆ ಅರ್ಧದಷ್ಟು ಕುಸಿತವಾಗಿದೆ. ಕೆ.ಜಿ. ₹ 10 ಇದ್ದದ್ದು, ₹5ಕ್ಕೆ ಇಳಿದಿದೆ. ಈರುಳ್ಳಿ ಬೆಲೆ ಈ ವಾರ ₹ 10 ಏರಿಕೆಯಾಗಿ, ಕೆ.ಜಿ ₹ 50ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಬೀನ್ಸ್‌ಕೆ.ಜಿ.ಗೆ ₹ 40, ಆಲೂಗೆಡ್ಡೆ ₹ 20, ಕ್ಯಾರೆಟ್ ₹ 60, ಹಾಗಲಕಾಯಿ ₹ 40, ದಪ್ಪ ಮೆಣಸಿನ ಕಾಯಿ ₹ 60, ನುಗ್ಗೇಕಾಯಿ ಕೆ.ಜಿ

₹ 100 ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ, ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪು ಕಂತೆಗೆ ₹ 10 ರಂತೆ ಲಭ್ಯ ಇದೆ.

ಮೂಸಂಬೆ ಕೆ.ಜಿ ಗೆ ₹ 80, ಬಾಳೆಹಣ್ಣು ₹ 70, ಸೇಬು ₹ 100, ಸೀತಾಫಲ ₹ 100, ಕಿತ್ತಳೆಹಣ್ಣು ₹ 60, ಅನಾನಸ್ ₹ 100, ಪಪ್ಪಾಯ ಮತ್ತು ಕಲ್ಲಂಗಡಿ ಹಣ್ಣು ₹ 30, ಸಪೋಟ ಕೆ.ಜಿ.ಗೆ ₹ 100ಕ್ಕೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT