ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಮೀನು ರಾಮ ಸೇವಾ ಟ್ರಸ್ಟ್‌ಗೆ ಸೇರಿದ್ದು’

Last Updated 9 ಜನವರಿ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಕಗ್ಗಲೀಪುರದ 4 ಎಕರೆ ಜಮೀನನ್ನು ಶ್ರೀ ರಾಮ ಸೇವಾ ಮಂಡಳಿ ಕಬಳಿಸಿಲ್ಲ. ಸಂಗೀತ ಗ್ರಾಮ ನಿರ್ಮಿಸಲೆಂದು 2001ರಲ್ಲಿ ಸರ್ಕಾರ ಈ ಜಾಗವನ್ನು ಮಂಡಳಿಗೆ ಮಂಜೂರು ಮಾಡಿತ್ತು’ ಎಂದು ಮಂಡಳಿಯ ಸಂಚಾಲಕ ವರದರಾಜ್‌ ತಿಳಿಸಿದ್ದಾರೆ.

ನಂಜಪ್ಪ ಬೋವಿ ಎಂಬುವರಿಗೆ ಸೇರಿದ್ದ 4 ಎಕರೆ ಜಮೀನು ಕಬಳಿಸಲು ಶ್ರೀರಾಮ ಸೇವಾ ಮಂಡಳಿಯು ಹುನ್ನಾರ ನಡೆಸಿದೆ ಎಂದು ಆರೋಪಿಸಿ ರಾಜ್ಯ ಆದಿಜಾಂಬವ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು ‘ಜಾಗವು ಶ್ರೀರಾಮ ಸೇವಾ ಟ್ರಸ್ಟ್‌ಗೆ ಸೇರಿರುವುದರ ದಾಖಲೆಗಳು ನಮ್ಮ ಬಳಿ ಇವೆ. ಜಮೀನು ತಮ್ಮದೆಂದು ಆರೋಪ ಮಾಡುತ್ತಿರುವವರು ದಾಖಲೆಗಳಿದ್ದರೆ ತೋರಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT