ಹಾಸನ: ನಗರದ ಜೋಯಾಲುಕ್ಕಾಸ್ ಆಭರಣ ಅಂಗಡಿ ಮೇಲೆ ಬುಧವಾರ ಕೇರಳದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಎರಡು ವಾಹನದಲ್ಲಿ ಬಂದ ಅಧಿಕಾರಿಗಳ ತಂಡ, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿತು. ಹಾಗಾಗಿ ಮಧ್ಯಾಹ್ನದಿಂದಲೇ ಅಂಗಡಿ ಬಂದ್ ಮಾಡಲಾಗಿತ್ತು. ಬಂದ ಗ್ರಾಹಕರನ್ನು ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದರು.