‘ದಕ್ಷಿಣ ಕನ್ನಡದ ಜನಪ್ರತಿನಿಧಿಗಳು ನೀರಿನ ವಿಷಯದಲ್ಲಿ ಸೂಕ್ತ ನಿರ್ಧಾರಕ್ಕೆ ಬರುತ್ತಾರೆ. ಆದರೆ, ಆ ಧೈರ್ಯ, ಧೋರಣೆ ನಮ್ಮ ಭಾಗದ ರಾಜಕಾರಣಿಗಳಿಗೆ ಇಲ್ಲ’ ಎಂದು ಕಿಡಿ ಕಾರಿದರು. ‘ಮಹದಾಯಿ ಈ ಭಾಗದ ರೈತರ ಬದುಕಿನ ಅವಿಭಾಜ್ಯ ಅಂಗ. ಇದರ ಬಗ್ಗೆ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು. ಮಲಪ್ರಭಾ ಒಡಲು ತುಂಬಿಸಬೇಕು’ ಎಂದು ಆಗ್ರಹಿಸಿದರು. ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ಈರಣ್ಣ ಗಡಗಿಶೆಟ್ಟರ, ಎಸ್.ಬಿ.ಜೋಗಣ್ಣವರ, ಅಣ್ಣಪ್ಪಗೌಡ ಪಾಟೀಲ, ಸುಭಾಸ ಗಿರಿಯಣ್ಣವರ ಇದ್ದರು.