ಸರ್ವೆ ನಂಬರ್ 181ರಲ್ಲಿ ಭೂಮಿ ಅತಿಕ್ರಮಿಸಿದ್ದ ಸರೋಜ, ಲೀಲಾವತಿ, ರಾಧಾ ಹಾಗೂ ಸರ್ವೆ ನಂಬರ್ 305ರಲ್ಲಿ ಗುಡಿಸಲು ನಿರ್ಮಿಸಿದ್ದ ಮಂಜಗಳಲೆ ಗ್ರಾಮದ ಸ್ವಾಮಿ, ದಾಸನಾಯ್ಕ, ಗಣಪತಿ, ಕೃಷ್ಣಮೂರ್ತಿ, ಮಂಜಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅತಿಕ್ರಮಣ ಮಾಡಿದ ಬಹುತೇಕ ಮಂದಿಗೆ ಈ ಹಿಂದೆ ಸರ್ಕಾರದಿಂದ ಬೇರೆಡೆಗೆ ಭೂಮಿ ಮಂಜೂರಾಗಿರುವುದಾಗಿ ತಿಳಿದು ಬಂದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.