ಕಾರ್ಯಾಂಗದ ಅವ್ಯವಹಾರಗಳನ್ನು, ಅದರಲ್ಲಿದ್ದುಕೊಂಡೇ ಬಯಲಿಗೆಳೆಯುತ್ತಿದ್ದವರನ್ನು ಅನ್ಯಾಯದ ವಿರುದ್ಧ ಹೋರಾಡುವವರು (whistle blowers) ಎನ್ನಲಾಗುತ್ತಿತ್ತು. ಈಗಲಾದರೋ, ನ್ಯಾಯಮೂರ್ತಿಗಳು ಕಹಳೆಯನ್ನೇ ಊದಿದ್ದಾರೆ! ಎಚ್ಚೆತ್ತುಕೊಳ್ಳಬೇಕಾದ್ದು ನ್ಯಾಯಾಂಗವಲ್ಲ, ಕಾರ್ಯಾಂಗ-ಶಾಸಕಾಂಗಗಳು ಮತ್ತು ಅದನ್ನು ಉಂಟುಮಾಡುವ ಚುನಾವಣಾ ವ್ಯವಸ್ಥೆ.