‘ನ್ಯಾಯಾಂಗದ ಪಾಲಿನ ಸುದೀರ್ಘ ವಾರಾಂತ್ಯ!’ (ಪ್ರ.ವಾ., ಜ.14) ಎಂಬ ಶೇಖರ್ ಗುಪ್ತ ಅವರ ಅಂಕಣವನ್ನು ಓದಿದಾಗ, ಮೈಗೆ ಎಣ್ಣೆ ಹಚ್ಚಿಕೊಂಡು ಕುಸ್ತಿ ಅಖಾಡಕ್ಕಿಳಿದ ಪೈಲ್ವಾನನ ಜಾಣತನ ನೆನಪಿಗೆ ಬರುತ್ತದೆ. ಒಬ್ಬ ಚಾಣಾಕ್ಷ ಬರಹಗಾರ, ಜಾಣತನವನ್ನು ಮೆರೆದು ಹೇಗೆ ನುಣುಚಿಕೊಳ್ಳಲು ಸಾಧ್ಯ ಎನ್ನುವುದನ್ನು ಈ ಬರಹ ತೋರಿಸುತ್ತದೆ!