ದೇಶದಲ್ಲಿ 32 ಲಕ್ಷ ಎನ್ಎಸ್ಎಸ್ ಕಾರ್ಯಕರ್ತರು ಇದ್ದಾರೆ. ಈ ಮೊದಲು ರಾಜ್ಯದವರ ಸಂಖ್ಯೆ ಕೇವಲ 3 ಲಕ್ಷ ಇತ್ತು. ಇದನ್ನು 10 ಲಕ್ಷಕ್ಕೆ ಹೆಚ್ಚು ಮಾಡಬೇಕೆಂದು ಗುರಿ ಇಟ್ಟುಕೊಂಡೆವು. ಈಗ 6 ಲಕ್ಷವನ್ನು ತಲುಪಿದ್ದೇವೆ. ಈ ಮೂಲಕ ಅತ್ಯಂತ ಹೆಚ್ಚು ಎನ್ಎಸ್ಎಸ್ ಕಾರ್ಯಕರ್ತರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
***
ಮನುಷ್ಯ ಶ್ರೇಷ್ಠನಾಗುವುದಕ್ಕೆ ಬೇಕಾದ ಎಲ್ಲವೂ ಅವನಲ್ಲೇ ಇವೆ. ನಿತ್ಯದ ನಮ್ಮ ವರ್ತನೆಯಿಂದ ಚಾರಿತ್ರ್ಯ ನಿರ್ಮಾಣವಾಗುತ್ತದೆ.
– ಮಾತಾ ವಿವೇಕಮಯಿ, ಭವತಾರಿಣಿ ಆಶ್ರಮ, ಬೆಂಗಳೂರು.
**
ಖಿನ್ನತೆಗೆ ಒಳಗಾದವರು ಸ್ವಾಮಿ ವಿವೇಕಾನಂದ ಅವರ ಬರಹಗಳನ್ನು ಓದಿದರೆ ಆತ್ಮಹತ್ಯೆಯಿಂದ ವಿಮುಖರಾಗಬಹುದು.
– ಡಿ.ಭಾರತಿ, ಮೈಸೂರು ವಿ.ವಿ. ಕುಲಸಚಿವೆ