‘ತುಲಾಭಾರ ಸೇವೆ ವಿಭಾಗದ ಮೇಲ್ವಿಚಾರಣೆ ನಡೆಸುತ್ತಿದ್ದ ಅಭಿಷೇಕ್ ನಾಲ್ಕು ವರ್ಷದಿಂದ ಈ ಬಾಬ್ತಿನಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವ ಶಂಕೆ ಇದೆ. ಆದ್ದರಿಂದ ಮತ್ತೆ ಹಳೆ ಲೆಕ್ಕಪತ್ರ ತಪಾಸಣೆ ನಡೆಸುವಂತೆ ವರದಿ ನೀಡಲಾಗಿದೆ. ಇಲಾಖೆಯ ವಿಚಾರಣೆ ನಡೆಯುವವರೆಗೆ ಈ ಮೂವರನ್ನೂ ಅಮಾನತು ಮಾಡಲಾಗಿದೆ. ಜಿಲ್ಲಾಧಿ ಕಾರಿಗೆ ಪ್ರಕರಣದ ವರದಿ ನೀಡಲಾಗಿದೆ’ ಎಂದು ದೇಗುಲದ ಇಒ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.