ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾತನಾಡಿ, ಟಿ.ವಿಗಳಲ್ಲಿ ಜ್ಯೋತಿಷಿಗಳು, ಆಚಾರ್ಯರು ಜನರನ್ನು ಅಂಧಕಾರಕ್ಕೆ ತಳ್ಳಲು ಸುಳ್ಳು ಹೇಳುತ್ತಾರೆ. ಅವರ ಆಟವನ್ನು ಬಯಲು ಮಾಡಲು ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಕಡೆ ಗ್ರಹಣಗಳ ಕುರಿತು ವೈಜ್ಞಾನಿಕ ವಿವರಣೆ ನೀಡಿ ವೀಕ್ಷಣೆಗೆ ಸಿದ್ಧಗೊಳಿಸಬೇಕು ಎಂದರು.