‘ಒಡೆಯರ ಮಠದ ಭಕ್ತರು ಎಂದು ಹೇಳಿಕೊಂಡವರು ಹಲ್ಲೆ ನಡೆಸುತ್ತಿದ್ದರೂ, ಅಲ್ಲಿಯೇ ಇದ್ದ ಚಿತ್ರಶೇಖರ ಒಡೆಯರ ಸ್ವಾಮೀಜಿ ಮೌನವಾಗಿ ವೀಕ್ಷಿಸುತ್ತಿದ್ದರು. ಹೀಗಾಗಿ ಅವರ ಕುಮ್ಮಕ್ಕಿನ ಸಂಶಯ ಕಾಡುತ್ತಿದೆ’ ಎಂದು ಧರ್ಮದರ್ಶಿ ಕೃಷ್ಣಮೂರ್ತಿ ವಡ್ನಿಕೊಪ್ಪ ದೂರಿದರು. ‘ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಗಂಗಾಮತ ಸಮಾಜದ ಗುರುಗಳು. ಶೂದ್ರ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೆ ಪೂಜೆ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಅಲ್ಲದೇ, ಕೆಲ ಗಂಗಾಮತಸ್ಥರನ್ನೇ ಮುಂದೆ ಬಿಡುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಗುರುಪೀಠದ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ ಆರೋಪಿಸಿದರು.