‘ಹಿಂದಿನ ಶೃಂಗೇರಿ ಗುರುಗಳಿಗೆ ಹೈದರಾಬಾದ್ ನಿಜಾಮರು ವಜ್ರದ ಕಿರೀಟ ಸಮರ್ಪಿಸಿದ್ದರು. ಅದನ್ನು ದಸರಾ ಸಂದರ್ಭದಲ್ಲಿ ಗುರುಗಳ ತಲೆ ಮೇಲೆ ಇಡುತ್ತಾರೆ. ಗುರುಗಳಲ್ಲಿ ಅಂತಹ ಶಕ್ತಿ ಇತ್ತು. ಸಕಲರ ಮನಸ್ಸು ಗೆದ್ದ ಕಾರಣಕ್ಕಾಗಿ ಭಕ್ತಿ ಮತ್ತು ಗೌರವದಿಂದ ಕಿರೀಟ ಸಮರ್ಪಿಸಿದ್ದಾರೆಯೇ ಹೊರತು ಬೇರೆ ಕಾರಣಕ್ಕಲ್ಲ. ಶೃಂಗೇರಿ ಆಚಾರ್ಯರು ಯಾವುದೇ ವಿವಾದಗಳಿಗೆ ಹೋದವರಲ್ಲ. ಪ್ರತಿ ನಿತ್ಯ ಚಂದ್ರಮೌಳಿಗೆ ಪೂಜೆ ಮಾಡುತ್ತಾರೆ. ಹಿಂದುತ್ವದ ವಿಚಾರದಲ್ಲಿ ಬಡಿದಾಡುತ್ತಿರುವ ಎರಡೂ ಪಕ್ಷಗಳು ಇದನ್ನು ತಿಳಿದುಕೊಳ್ಳಬೇಕು’ ಎಂದು ದೇವೇಗೌಡ ಹೇಳಿದರು.