ಅವರ ನಿರ್ದೇಶನದಂತೆ ಸ್ಥಳೀಯ ಪೊಲೀಸರು ವಾಹನವನ್ನು ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದರು. ಮುಧೋಳ ಕಡೆಯಿಂದ ಕೂಡಲ ಸಂಗಮಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರತಿ ನಿಧಿಗಳು ಪೊಲೀಸರ ವರ್ತನೆ ವಿರೋಧಿಸಿ ವಾಹನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಸುಮಾರು 2 ಗಂಟೆ ಹೆದ್ದಾರಿ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರ ದಾಡುವಂತಾಯಿತು. ಸ್ಥಳೀಯರು ಮತ್ತು ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಪ್ರಭಾರ ಪಿ.ಎಸ್.ಐ. ಶಿವಯೋಗಿ ಲೋಹಾರ ಇದ್ದರು.