‘ಈ ಹಿಂದೆ ನಾನು ಸಂತೋಷ್ ಟ್ರೋಫಿಯಲ್ಲಿ ಆಡಿದ್ದೇನೆ. ದೆಹಲಿ ತಂಡವನ್ನು ಮುನ್ನಡೆಸಿದ್ದೇನೆ. ಈ ಟೂರ್ನಿಯಲ್ಲಿ ತೋರುತ್ತಿದ್ದ ಸಾಮರ್ಥ್ಯದ ಆಧಾರದಲ್ಲೇ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಆಯ್ಕೆ ಸಮಿತಿ ಸದಸ್ಯರು ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ನೋಡುತ್ತಿದ್ದರು. ಆಗ ಪ್ರಮುಖ ಆಟಗಾರರು ಇದರಲ್ಲಿ ಆಡುತ್ತಿದ್ದರು. ಈಗ ಐಎಸ್ಎಲ್, ಐ ಲೀಗ್ ಸೇರಿದಂತೆ ಸಾಕಷ್ಟು ಪಂದ್ಯಗಳು ನಡೆಯುತ್ತಿರುವ ಕಾರಣ ಹಲವರು ಸಂತೋಷ್ ಟ್ರೋಫಿಯಿಂದ ಹಿಂದೆ ಸರಿಯುತ್ತಾರೆ’ ಎಂದರು.