2017ರ ಡಿ.17ರಂದು ದೆಹಲಿಯ ವೇಶ್ಯಾವಾಟಿಕೆ ಗೃಹದಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿಯು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಳು. ನಂತರ ಆಕೆಯನ್ನು ರಕ್ಷಿಸಿದ ದೆಹಲಿ ಪೊಲೀಸರು ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದರು. ಆಕೆ ತನ್ನ ವಿಳಾಸ ತಿಳಿಸಿ ಊರಿಗೆ ಕಳುಹಿಸುವಂತೆ ಕೋರಿಕೊಂಡಾಗ, ದೆಹಲಿ ಪೊಲೀಸರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದರು.