ಕುರೆಕುಪ್ಪ (ಸಂಡೂರು): ‘ತರಕಾರಿ ಬೆಳೆಗಳ ಕಣಜ’ ಎಂದು ಪ್ರಸಿದ್ಧವಾದ ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಈಗ ಆ ಸಾಲಿಗೆ ಕಲ್ಲಂಗಡಿ ಬೆಳೆ ಸೇರ್ಪಡೆಯಾಗಿದೆ. ಎಲ್ಲಿ ನೋಡಿದರೂ ಕಾಣುವ ಹೂಕೋಸು, ಟೊಮೆಟೊ, ಬೀಟ್ರೂಟ್, ಮೂಲಂಗಿ, ಬದನೆ ಬೆಳೆಯ ಜೊತೆಗೆ ಕಲ್ಲಂಗಡಿಯೂ ಕಣ್ಮನ ಸೆಳೆಯಲಿದೆ. ಗ್ರಾಮದ ರೈತ ಎಚ್. ಶಿವನಗೌಡ ಇದೇ ಮೊದಲ ಬಾರಿಗೆ ಐದು ಎಕರೆ ಜಮೀನಿನಲ್ಲಿ ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿ ‘ಇಶಾ’ ತಳಿಯ ಕಲ್ಲಂಗಡಿ ಬೆಳೆದಿದ್ದು, 20–25 ದಿನಗಳಲ್ಲಿ ಬೆಳೆ ಕಟಾವಿಗೆ ಬರಲಿದೆ.