‘ಸಿದ್ದರಾಮಯ್ಯ ಅವರು ಪಾಂಡವ-ಕೌರವರ ಕುರಿತು ನೀಡಿರುವ ಹೇಳಿಕೆಯು ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ. ಯಾರು ಕೌರವರು, ಪಾಂಡವರು ಎಂಬುದು ಇನ್ನು ಮೂರು ತಿಂಗಳಲ್ಲಿ ತಿಳಿಯಲಿದೆ. ಈ ಬಗ್ಗೆ ಮಾತನಾಡುವ ನೈತಿಕತೆಯೂ ಅವರಿಗೆ ಇಲ್ಲ. ಮೀನು ತಿಂದು ಧರ್ಮಸ್ಥಳಕ್ಕೆ ಹೋದವರು ಅವರು. ಉಡುಪಿಗೆ ಹತ್ತು ಸಲ ಹೋದರೂ ಶ್ರೀಕೃಷ್ಣನ ದರ್ಶನ ಪಡೆಯದವರು ಅವರು. ದೇವರ ದರ್ಶನಕ್ಕೂ ಆಹ್ವಾನ ನೀಡಬೇಕಾ’ ಎಂದು ಯಡಿಯೂರಪ್ಪ ಪ್ರಶ್ನಿಸಿದರು.