ಕುದುರೆಮುಖ ಕಡೆಯಿಂದ ಕಳಸ, ಸಂಸ, ದಿಡುಪೆ, ನಾರಾವಿ, ಕುತ್ಲೂರು, ಮಲವಂತಿಗೆ, ಲಾಯಿಲ, ಕೊಲ್ಲಿಗಿಲು ಒಂದನೇ ದಾರಿ. ಮೂಡಿಗೆರೆ ಬೈರಾಪುರವಾಗಿ ಕಬ್ಬಿನಾಲೆ ರಕ್ಷಿತಾರಣ್ಯದ ಮೂಲಕ ಕಾಡಿನಲ್ಲಿ ಎತ್ತಿನಭುಜವಾಗಿ ಶಿಶಿಲಕ್ಕೆ ಬರಲು ದಾರಿಯಿದ್ದು, ಇದು ಮಿತ್ತಮಜಲನ್ನು ಸಂಪರ್ಕಿಸುವ ಎರಡನೇ ದಾರಿಯಾಗಿದೆ. ನಕ್ಸಲರು ಭೇಟಿ ನೀಡಿರುವ ಮಿತ್ತಮಜಲು ಶಿರಾಡಿ ಗ್ರಾಮದ ಅಂಚಿನಲ್ಲಿದೆ. ಇಲ್ಲಿ ಬಹುತೇಕ ದಲಿತ ಕುಟುಂಬಗಳು ನೆಲೆಸಿವೆ.