ಈ ವೇಳೆ ವಿರೋಧಿ ಗುಂಪಿನವರು, ‘ಕಂಚೀ ವರದರಾಜಸ್ವಾಮಿಯ ಪೂಜಾರಿಕೆ ವಂಶಸ್ಥರು ಹಾಗೂ ಆ ದೇವರ ಮುದ್ರೆ ಆಗಿರುವ ವ್ಯಕ್ತಿ ಹೊರತುಪಡಿಸಿ, ಬೇರೆ ಯಾರ ಮೇಲೂ ಬರುವುದಿಲ್ಲ. ಊರು ಬಿಟ್ಟು ಬೆಂಗಳೂರಿನಲ್ಲಿರುವ ಲೋಕೇಶ್ ತನ್ನ ಮೈಮೇಲೆ ಕಂಚೀವರದರಾಜಸ್ವಾಮಿ ಬರುತ್ತದೆ ಎಂದು ಜನರನ್ನು ನಂಬಿಸಿದ್ದಾನೆ. ಕಷ್ಟಗಳ ನಿವಾರಣೆಗೆಂದು ಆತನ ಬಳಿ ಹೋಗುವ ಜನರಿಂದ ಹಣ ಸುಲಿಗೆ ಮಾಡಿದ್ದಾನೆ. ಇವನನ್ನು ನಂಬಿ ಅನೇಕರು ಮೋಸ ಹೋಗಿದ್ದಾರೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.