ಷೇಕ್ಸ್ಪಿಯರ್ನ ‘ಕಿಂಗ್ಲಿಯರ್’ ನಾಟಕದ ಬಗ್ಗೆ ಉಲ್ಲೇಖಿಸಿದ ಚಂದ್ರಶೇಖರ ತಾಳ್ಯ ಅವರು, ‘ಹಸಿವು, ಬಡತನ ಇದ್ದವರು ಮಾತ್ರ ಕಲಾವಿದರಾಗುವುದಿಲ್ಲ. ಕಲೆ ಒಂದು ಹೊಟ್ಟೆಪಾಡಲ್ಲ. ವ್ಯಾಪಾರ, ಮಾರಾಟದ ಸರಕೂ ಅಲ್ಲ. ಒಬ್ಬ ಕಲಾವಿದ ಹಸಿವಿಲ್ಲದಿದ್ದರೂ, ದೊಡ್ಡ ನಟನಾಗುವ ಹಂಬಲ ಹೊಂದಿರುತ್ತಾನೆ. ಕಲೆಗೆ ಪ್ರೋತ್ಸಾಹ, ಮಾರ್ಗದರ್ಶನ ಅಗತ್ಯ. ಶೈಕ್ಷಣಿಕ ಸಂಸ್ಥೆಗಳು ಕಲೆಗೆ ಹೆಚ್ಚು ಒತ್ತು ನೀಡಬೇಕು’ ಎಂದರು.