‘ಶ್ರಮದಲ್ಲಿ ದೇವರನ್ನು ಕಾಣುವ ಗ್ರಾಮೀಣರು ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ಹಿಂದಿನದನ್ನು ಮರೆಯದೆ ಸಂಸ್ಕೃತಿಯ ಬೇರನ್ನು ಗಟ್ಟಿಯಾಗಿಸಿ ಉಳಿಸಿಕೊಟ್ಟಿದ್ದಾರೆ. ಅದು ಆಹಾರ ಸೇವನೆ, ಪರಸ್ಪರ ಸಹಬಾಳ್ವೆ, ಇತರರ ಹಿತಚಿಂತನೆ ಎಲ್ಲಕ್ಕೂ ಮುನ್ನುಡಿ ಬರೆದಂತಿದೆ. ಜಾನಪದ ಎಲ್ಲ ವಿಕಸನಕ್ಕೂ ತಾಯಿಬೇರು’ ಎಂದು ನುಡಿದರು.